ಬಿಳಿಸೀರೆಯವಳು

ಬಿಳಿಸೀರೆ ಮುತ್ತೈದೆ ನಿನಗೇನು ಬಂದೈತೆ
ಮನೆ ಬಿಟ್ಟು ಹೊರಗೇ ಹೋಗ್ತಿ ಯಾಕೆ
ನಿನ್ನಿಂದ ಮನಿಚೆಂದ ಮನಿಬಾಳು ಆನಂದ
ಪರದೇಶಿ ಮಾಡ್ಬಿಟ್ಟು ಹೋಗ್ತಿ ಯಾಕೆ

ಆಕಾಶಕ್ಕೆ ಚಂದ್ರಾಮಾ ಭೂಷಣಾಗಿ ಹೊಳಿವಂತೆ
ಈ ಮನಿಯ ನೀನೇs¸ ಬೆಳಗುವಾಕೆ
ಗ್ಯಹಲಕ್ಷ್ಮಿ ನೀ ಹೋದ್ರೆ ದಾರಿದ್ರ್ಯ ತುಂಬ್ತೈತೆ
ಹೊರಗ್ಹೋಗಿ ನೀ ಹ್ಯಾಂಗೆ ಉಳಿಯುವಾಕೆ

ನೀನಿದ್ರೆ ಮನಿಯಾಗೆ ಧನಧಾನ್ಯ ತುಂಬ್ತಾವೆ
ಬಾವ್ಯಾಗೆ ಗಂಗಮ್ಮ ತುಳುಕುವಂಗೆ
ನೀನಂದ್ರೆ ಶಕ್ತೀ ನೀನಂದ್ರೆ ಮುಕ್ತೀ
ಆನಂದ ರಸ ತಾನು ಹರಿಯುವಂಗೆ

ಯಾವ ಪೀಡೆ ಬಡಕೊಂತ್ಯೊ
ಯಾವ ಮಾರಿ ಹೊಕ್ಕೂಂತ್ಯೊ
ದೆವ್ವ ಬಡದೋರಂಗೆ ನೀ ಹೋಗ್ತೀಯಾ
ನನಕೈಯಾಗೇನಿಲ್ಲ ನಿನ್ಹಿಡಿದು ನಿಲ್ಲಸಾಕೆ
ಜಲಪಾತದೆದುರಿಗೆ ಮೀನಾಗ್ತೀಯ

ನಿನ್ನಿಂದ ಏಸ್ಟೊಟ್ಲ ತುಂಬಿಕೊಂಡು ಹಾಡಬೇಕೊ
ವಂಶದ ಬಳ್ಳಿಯೆಷ್ಟು ಹಬ್ಬಬೇಕೊ
ಏಸ್ಬಾಳು ಬಂಗಾರ ಆಗ್ಬೇಕೊ ಬೆಳಿಬೇಕೊ
ಅದ ಬಿಟ್ಟ ನೀ ನನ್ನ ದಬ್ಬಬೇಕೊ?
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಿಕ್ಷಕರಿಗೊಂದು ಮನವಿ-ಡಾ|| ಅಂಬೇಡ್ಕರ್
Next post ಕಾಯಕದ ಕಟ್ಟಳೆ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys